Monday, October 27, 2008

ಮೂಡಿದ ಕವಿ

ನಿನ್ನ ಇರುವಿಕೆ ಕಡಲಾಗಿ ಭಾವನೆಯು ಅಲೆಯಾಗಿ
ಮನದ ತೀರಕೆ ಬಂದು ಅಪ್ಪುತಿರಲು
ಅಲ್ಲಿ ಬರೆದ ಪ್ರೇಮ ಕಾವ್ಯ ಹೊಸದಾಗಿ ಮೂಡಿ
ನವ್ಯ ಕವಿಯ ಜನ್ಮ ನನದಾಯಿತು

--- ಗಿರೀಶ್

ಒಲವು

ಹುಡುಕಿ ಸಿಗುವುದು ಪ್ರೀತಿ ಅಲ್ಲ
ಹುಡುಕದೆ ದೊರೆತರೆ ಪ್ರೇಮವಲ್ಲ
ಅದು ಹುಟ್ಟುವುದು ,
ಮನದ ಭಾವನೆ ಕಣ್ಣಂಚಿನ ಸನ್ನೆಯಾಗಿ ಹೊರಬರಲು
ಉದ್ಭವಿಸುವುದೇ ಪ್ರೀತಿ
ಕರ್ಮೊಡದ ಅಂಚಿನಿಂದ ಮಳೆ ಹನಿಯಾಗಿ
ನವಿಲಿನ ನರ್ತನದ ಆನಂದವಾಗಿ
ಹೊಮ್ಮುವುದೇ ಪ್ರೀತಿ
ಮನದ ಕಡಲಲ್ಲಿ ಇರುವುದು ಬರಿ ಕನಸು
ಕೆದಕಿದರೆ ದೊರೆವುದು ಬರಿಯ ನೋವು
ಅರಿಯದೇ ಜನ್ಮಿಸುವುದು ...ಅದೇ ಒಲವು

--- ಗಿರೀಶ್


No comments: